ತಾತ್ವಿಕ ಕವನ-ಕಗ್ಗಗಳು
- ಸತ್ಯ - ಮಿಥ್ಯ,
- ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ;
- ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ;
- ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ;
- ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧||
-
- ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ;
- ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ;
- ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ?
- ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨||
-
- ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ;
- ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ;
- ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ;
- ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩||
-
- ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು,
- ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು,
- ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು,
- ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪||
-
- ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ
No comments:
Post a Comment