ಎಳೆಯ ಮನಸು
(ಫ್ರಾಯಿಡ ನ ನೆನೆದು)
ಬಣ್ಣ ಬಣ್ಣದ ಕುಂಚ ಚಿತ್ತ ಭಿತ್ತಿಯ ಮೇಲೆ,
ನೆನೆದು ಚಿತ್ರಿಪುದು ಆ ನಿನ್ನ ಚಿತ್ರ ಮಾಲೆ ,
ಬಾಲ ಲೀಲೆಯ ಪುಷ್ಪಗಳ ನಲ್ಲಲ್ಲಿ ಆಯ್ದು ತಂದು,
ಮಾಲೆಯನು ನೇಯುವುದು ಆ ನಿನ್ನ ಚಿತ್ರಕೆಂದು;
ಕನಸಿನಲಿ ತೊಡಗುವುದು -ನೇಯುವುದು ನೆನಹು ಮಾಲೆ,
ಪುಷ್ಪಗಳು ಅಲ್ಲೊಂದು -ಇಲ್ಲೊಂದು ಬಾಲಲೀಲೆ:
ಸಂಚರಿಸಿ ನಿನ್ನೆಡೆಗೆ ಎನ್ನಮನ ವೈ ತಂದು-
ಸಂತಸದೆ ನಿಲ್ಲುವುದು ನಿನ್ನೊಡನೆ ಪುಳುಕಗೊಡು
ಇಂತೇಕೆ - ಹೀಗೇಕೆ?. ಎಂದಾನು ಎನ್ನ ಮನದೆ,
ಚಿಂತಿಸಿದೆ ಕಾಲಮೀರಿರೆ ತಿಳಿದೆ ಕಟ್ಟ –ಕಡೆಗೆ.
ಅ ಂದೊಂದು ದಿನ ನಿನ್ನ ನಾನೆನ್ನ ಬಳಿಗೆ ಕರೆಯೆ,
ಆಗ ನೀ ಮೃದು ಮಧುರ ಹಾಸದಲಿ ಬಳಿಗೆ ಸರಿಯೆ,
ಎತ್ತಿ ಮುದ್ದಿಸುತ ‘ಕೊಡು ಮುತ್ತ’ ನೆನಲು.
ಕದ್ದಿರುವೆ ಹೃದಯವನೆ ಅಂದೆ, ನೀ ಮುದ್ದ ನಿಡಲು.
ಅಂ ದಿನಿಂ ಸಂದಿಹುದು ಇಪ್ಪತ್ತು ವರುಷ,
ಇಂದಿಗೂ ಅದ ನೆನೆ ಯೆ ಮನದೊಳಗೆ ಹರುಷ.
ಆದರೂ ಅಪಹೃತವ ತಿಳಯಲಿಷ್ಟು ವರುಷ,
ತಿಳಿದರೂ ಕಳ್ಳತನ ಸಿಟ್ಟಿಲ್ಲ ಎನಗೆ ಹರುಷ,
ನಿನ್ನರಸಿ ನಾ ಬಂದು ಸಂಧಿಸಲು ಕಣ್ಣು ನಿಮಿಷ,
ನಿನ್ನಧರವರಳುವುದು ಕಣ್ಣೊಲಗೆ ಮಿನುಗೆ ಹರುಷ.
ಇಬ್ಬರೇ ನಾವಿರಲು ಅರಿಯದೆಯೆ ನಮ್ಮ ಬಳಿಗೆ,
ಅಂದಿನಾದಿನಗಳವು ನುಸುಳುವವು ನಮ್ಮ ಕೇಳದೆಯೆ.
(ರಚನೆ;- ಬಿ . ಎಸ್. ಚಂದ್ರ ಶೇಖರ ಸಾಗರ,
(ಫ್ರಾಯಿಡ ನ ನೆನೆದು)
ಬಣ್ಣ ಬಣ್ಣದ ಕುಂಚ ಚಿತ್ತ ಭಿತ್ತಿಯ ಮೇಲೆ,
ನೆನೆದು ಚಿತ್ರಿಪುದು ಆ ನಿನ್ನ ಚಿತ್ರ ಮಾಲೆ ,
ಬಾಲ ಲೀಲೆಯ ಪುಷ್ಪಗಳ ನಲ್ಲಲ್ಲಿ ಆಯ್ದು ತಂದು,
ಮಾಲೆಯನು ನೇಯುವುದು ಆ ನಿನ್ನ ಚಿತ್ರಕೆಂದು;
ಕನಸಿನಲಿ ತೊಡಗುವುದು -ನೇಯುವುದು ನೆನಹು ಮಾಲೆ,
ಪುಷ್ಪಗಳು ಅಲ್ಲೊಂದು -ಇಲ್ಲೊಂದು ಬಾಲಲೀಲೆ:
ಸಂಚರಿಸಿ ನಿನ್ನೆಡೆಗೆ ಎನ್ನಮನ ವೈ ತಂದು-
ಸಂತಸದೆ ನಿಲ್ಲುವುದು ನಿನ್ನೊಡನೆ ಪುಳುಕಗೊಡು
ಇಂತೇಕೆ - ಹೀಗೇಕೆ?. ಎಂದಾನು ಎನ್ನ ಮನದೆ,
ಚಿಂತಿಸಿದೆ ಕಾಲಮೀರಿರೆ ತಿಳಿದೆ ಕಟ್ಟ –ಕಡೆಗೆ.
ಅ ಂದೊಂದು ದಿನ ನಿನ್ನ ನಾನೆನ್ನ ಬಳಿಗೆ ಕರೆಯೆ,
ಆಗ ನೀ ಮೃದು ಮಧುರ ಹಾಸದಲಿ ಬಳಿಗೆ ಸರಿಯೆ,
ಎತ್ತಿ ಮುದ್ದಿಸುತ ‘ಕೊಡು ಮುತ್ತ’ ನೆನಲು.
ಕದ್ದಿರುವೆ ಹೃದಯವನೆ ಅಂದೆ, ನೀ ಮುದ್ದ ನಿಡಲು.
ಅಂ ದಿನಿಂ ಸಂದಿಹುದು ಇಪ್ಪತ್ತು ವರುಷ,
ಇಂದಿಗೂ ಅದ ನೆನೆ ಯೆ ಮನದೊಳಗೆ ಹರುಷ.
ಆದರೂ ಅಪಹೃತವ ತಿಳಯಲಿಷ್ಟು ವರುಷ,
ತಿಳಿದರೂ ಕಳ್ಳತನ ಸಿಟ್ಟಿಲ್ಲ ಎನಗೆ ಹರುಷ,
ನಿನ್ನರಸಿ ನಾ ಬಂದು ಸಂಧಿಸಲು ಕಣ್ಣು ನಿಮಿಷ,
ನಿನ್ನಧರವರಳುವುದು ಕಣ್ಣೊಲಗೆ ಮಿನುಗೆ ಹರುಷ.
ಇಬ್ಬರೇ ನಾವಿರಲು ಅರಿಯದೆಯೆ ನಮ್ಮ ಬಳಿಗೆ,
ಅಂದಿನಾದಿನಗಳವು ನುಸುಳುವವು ನಮ್ಮ ಕೇಳದೆಯೆ.
(ರಚನೆ;- ಬಿ . ಎಸ್. ಚಂದ್ರ ಶೇಖರ ಸಾಗರ,
No comments:
Post a Comment