Monday, December 26, 2011

ಸಂಕ್ಷಿಪ್ತ ಸಂಧ್ಯಾವಂದನೆ. (ಸೂಚನೆಗಳೊಂದಿಗೆ)


ಸಂಕ್ಷಿಪ್ತ ಸಂಧ್ಯಾವಂದನೆ.

(ಸೂಚನೆಗಳೊಂದಿಗೆ)
ಸಂಕ್ಷೇಪ ಮಾಡಿದವರುಮತ್ತು ಟಿಪ್ಪಣಿ ಬರೆದವರು :
ಬಿ.ಎಸ್. ಚಂದ್ರ ಶೇಖರ ಸಾಗರ . ದಿ|| ೧ - ೦೨-೨೦೧೦;ಅಗತ್ಯವಿದ್ದರೆ ತಿದ್ದುಪಡಿಮಾಡಿಮತ್ತು ಸೇರಿಸಿಕೊಳ್ಳಿ)

ಸಂಧ್ಯಾವಂದನೆ;- ಹವ್ಯಕರು ಅನುಸರಿದುವ ಬೋಧಾಯನ ಪದ್ಧತಿಯ ಸಂಧ್ಯಾವಂದನೆಯಲ್ಲಿ ಮುಖ್ಯವಾಗಿ ಈ ಹದಿನಾಲ್ಕು ಕ್ರಿಯೆಗಳಿವೆ.
.೧. ಆಚಮನ ; . ೨. ಮಂತ್ರ ಸ್ನಾನ ೩. ಭಸ್ಮಧಾರಣ ; ೪. ಸಂಕಲ್ಪ ; ೫. ಮಾರ್ಜನ ; ೬. ಜಲ ಪ್ರಾಶನ ( ದುರಿತ ನಿವಾಹಣ) ; ೭. ಪುನಃ ಮಾರ್ಜನ ; ೮. ಅರ್ಘ್ಯ ಪ್ರದಾನ೯. ಗಾಯತ್ರೀ ಜಪ; ೧೦. ಸೂರ್ಯ ಉಪಸ್ಥಾನ (ಸೂರ್ಯನ ಬೀಳ್ಕೊಡಿಗೆ ವಂದನೆ) ೧೧. ಸರ್ವದೇವ ನಮಸ್ಕಾರ ಮತ್ತು ಅಭಿವಾದನ ; ೧೨. ಅಷ್ಟಾಕ್ಷರೀ ಜಪ ; ೧೩. ಪಂಚಾಕ್ಷರೀ ಜಪ; ೧೪. ಭಗವದರ್ಪಣ.
{ಉಪಸ್ಥಾನದ (ವೇದ) ಮಂತ್ರಗಳನ್ನು  ಸಂಕ್ಷಿಪ್ತ ಸಂಧ್ಯಾವಂದನೆ ಯಲ್ಲಿ ಕೊಟ್ಟಿಲ್ಲ. ಅದನ್ನು ಈಗ ಹೇಳುವುದು ಕಡಿಮೆ. ಆಗತ್ಯವಿದ್ದಲ್ಲಿ ಪೂರ್ಣಸಂಧ್ಯಾವಂದನೆ ಯ ಪಾಠದಿಂದ ತೆಗೆದುಕೊಳ್ಳಬಹುದು. ಅಥವಾ ಮೂರೂ ಹೊತ್ತಿನ ಉಪಸ್ಥಾನದ ಕ್ರಿಯೆ ಸೇರಿಸಿ ಓಂ ಸೂರ್ಯಾಯ ನಮಃಓಂ ಮಿತ್ರಾಯ ನಮಃಓಂ ವರುಣಾಯ ನಮಃ || ಎಂದು ಹೇಳಿ ನಮಸ್ಕರಿಸಬಹುದು}


ಶ್ರೀರಸ್ತು || ಶ್ರೀ ಗಣೇಶಾಯ ನಮಃ ||

(ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ; ಮಣೆ ಅಥವಾ ಚಾಪೆಯಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ (ಚಕ್ಕಲಮಕ್ಕಲು-ಚಕ್ಕಲಪಟ್ಟೆ ) ಅಥವಾ ಸುಖಾಸನ ದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು , ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ, ಸ್ಥಾನ ಶುದ್ಧಿ ಇರಬೇಕು )
ಪ್ರಾರ್ಥನೆ:-
ವಂದೇ ವಿಘ್ನೇಶ್ವರಂದೇವಂ ಸರ್ವ ವಿಘ್ನಾಧಿದೈವತಂ |
ಅಂತರಾಯ ನಿವೃತ್ಯರ್ಥಂತಂ ನಮಾಮಿ ಗಜಾನನಂ ||
ಗುರುಬ್ರಹ್ಮ ಗುರುರ್ವಿಷ್ಣೋಗುರರ್ದೇವೋ ಮಹೇಶ್ವರಃ |
ಗುರು ಸಾಕ್ಷಾತ್ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||
(ಕುಲ ದೇವತಾಭ್ಯೋ ನಮಃ - ಕುಲದೇವತೆಯನ್ನು/ಗಳನ್ನು ಸ್ಮರಿಸು; ಉದಾ:)
ಶ್ರೀ ಲಕ್ಷ್ಮಿನಾರಾಯಣಾಭ್ಯೋ ನಮಃ | ಶ್ರಿಲಕ್ಷ್ಮಿನಾರಾಯಣಾಯನಮಃ) (೧ ಲಕ್ಷ್ಮಿ ಮತ್ತು ನಾರಾಯಣಇಬ್ಬರಿಗೂ ನಮಸ್ಕಾರ - ೨. ಲಕ್ಷ್ಮಿಸಹಿತನಾದ ನಾರಾಯಣನಿಗೆ ಒಬ್ಬನಿಗೇ ನಮಸ್ಕಾರ ಯಾವುದಾದರೂ ಒಂದು ಕ್ರಮ ಅನುಸರಿಸ ಬೇಕು)
(ಶ್ರೀ ಲಕ್ಷ್ಮಿವೆಂಕಟರಮಣಾಭ್ಯೋ ನಮಃ|| ಶ್ರೀ ಲಕ್ಷ್ಮಿವೆಂಕಟರಮಣಾಯ ನಮಃ |)
(ಇಷ ದೇವತಾಭ್ಯೋ ನಮಃ - ತನಗೆ ಪ್ರೀತಿಯುಳ್ಳ ದೇವರನ್ನು ಮತ್ತುಗುರುಗಳನ್ನು ನೆನೆಯುವುದು, ನಮಿಸುವುದು ಉದಾ;) ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃ| ಶ್ರೀ ಶಾರದಾಂಬಾಯೈ ನಮಃ |
(ಪುನಹ ಗಣಪತಿಯ ವಂದನೆಯಿಂದ ಸಂಧ್ಯಾವಂದನೆ ಪ್ರಾರಂಭ) :-
ವಂದೇ ವಿಘ್ನೇಶ್ವರಂದೇವಂ ಸರ್ವ ವಿಘ್ನಾದಿದೈವತಂ |
ಅಂತರಾಯ ನಿವೃತ್ಯರ್ಥಂತಂ ನಮಾಮಿ ಗಜಾನನಂ |
ಆಚಮ್ಯ -ಓಂ ಋಗ್ವೇದಾಯಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ | (ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ ನೀರುಹಾಕಿಕೊಂಡು ಪ್ರತಿ ಮಂತ್ರಕ್ಕೂ ೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು - ಇದು ಒಂದುಸುತ್ತು ಆಚಮನ-ತ್ರಿರಾಚಮ್ಯ - ಪ್ರತಿ ಕ್ರಿಯೆಯ ವಚನವನ್ನುಹೇಳಿಕೊಂಡು ಕ್ರಿಯೆ ಮಾಡಬೇಕು ; ಆವರಣದಲ್ಲಿರುವುದು ಸೂಚನೆ. ಮುಂದೆ -ಮೇಲೆ ಗೀಟಿನ ಬದಲು ದಪ್ಪ ಅಕ್ಷರ ಹಾಕಿದೆ).(ಹವ್ಯಕ ಸಂಪ್ರದಾಯ)
(ಸ್ಮಾರ್ಥ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ ಸ್ವಾಹಾ, ಅಥವಾ ೧.ಅಚ್ಯುತಾಯ ನಮಃ, ೨.ಅನಂತಾಯ ನಮಃ. ೩.ಗೋವಿಂದಾಯ ನಮಃ. ಎಂದು ಹೇಳಿ ಆಚಮನ ಮಾಡುವುದು ಸಂಪ್ರದಾಯ.)

ಓಂ ಅಪವಿತ್ರಃವಿತ್ರೋ ವಾ ಸರ್ವಾಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂರೀಕಾಕ್ಷಂಸ ಬಾಹ್ಯಾಭ್ಯಂರಃ ಶುಚಿಃ ||
|| ಇತಿ ಹರಿಸ್ಮರಣಂ ಕೃತ್ವಾ|| ಅಚ್ಯುತಾನಮಃ | ಅಚ್ಯುತಾನಮಃ || ಅನಂತಾಯ ನಮಃ | ಅನಂತಾಯ ನಮಃ || ಗೋವಿಂದಾಯ ನಮಃ |ಗೋವಿಂದಾಯ ನಮಃ || ವಿಷ್ಣವೇ ನಮಃ |ವಿಷ್ಣವೇ ನಮಃ || ವಿಷ್ಣೋ ವಿಷ್ಣೋ ಸ್ಮರನ್ || (ಅನಾಮಿಕದಿಂದ ನೀರುಮುಟ್ಟಿಕೊಂಡು ಕಣ್ಣಿನ ರೆಪ್ಪೆಯನ್ನು ನಾದಿಕೊಳ್ಳುತ್ತಾ ಹರಿಸ್ಮರಣೆ ಮಾಡುವುದು; ಪ್ರತಿ ಸಾರಿ ಹರಿ ಸ್ಮರಣೆ ಮಾಡುವಾಗಲೂ ಹೀಗೆ ಮಾಡಬೇಕು)( ಇದೇ ರೀತಿ ಮುಂದೆ ಮೇಲೆ ಗೀಟು ಉಳ್ಳ ಉದಾತ್ತ ಅಕ್ಷರಗಳನ್ನು ಗೀಟಿಗೆ ಬದಲಾಗಿ ಎದ್ದ (ದಪ್ಪ) ಅಕ್ಷರಗಳಾಗಿ ಬರೆದಿದೆ ; ಅನುದಾತ್ತಕ್ಕೆ ಕೆಳಗೆ ಗೀಟು ಹಾಕಿದೆ.)
ತ್ರಿರಾಚಮ್ಯ: (ಮೇಲಿನಂತೆ).
ಅಥ ಭಸ್ಮ ಧಾರಣಂ: (ಭಸ್ಮ ಧರಿಸುವ ಮಂತ್ರ - ಕ್ರಿಯೆಯ ಮಂತ್ರಗಳನ್ನೂ ಹೇಳಿಕೊಳ್ಳಬೇಕು.).
|| ಭಸ್ಮಂ ಗ್ರಹೀತ್ವಾ || (ಬಲ ಹೆಬ್ಬೆರಳು,ಮಧ್ಯ ಬೆರಳು, ಅನಾಮಿಕ ಬೆರಳುಗಳಲ್ಲಿ ೧ ಚಿಟಿಕೆ ಭಸ್ಮವನ್ನು ತೆಗೆದುಕೊಂಡು, ಎಡ ಅಂಗೈ ಮಧ್ಯದಲ್ಲಿ ಇಟ್ಟುಕೊಂಡು, ಈಕೆಳಗಿನ ರುದ್ರ ಗಾಯತ್ರೀ ಮತ್ತು ಮೃತ್ಯಂಜಯ ಮಂತ್ರದಿಂದಅಭಿಮಂತ್ರಿಸಬೇಕು)
ಓಂ ತತ್ಪುರುಷಾಯವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃಪ್ರಚೋದಯಾತ್|| ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ || ಊರ್ವಾರುಕಮಿವಬಂಧನಾನ್ಮ ತ್ಯೊ ರ್ಮುಕ್ಷೀಯ ಮಾ ಮೃತಾತ್ ||(ಬಂಧನಾತ್ ಮೃತ್ಯೋರ್ ಮುಕ್ಷೀಯ)
ಅಗ್ನಿರಿತಿ ಭಸ್ಮ| (ಹಣೆಗೆ- ಮಧ್ಯ ಬೆರಳು ಅನಾಮಿಕ ಬೆರಳುಗಳಿಂದ ಹಣೆಯ ಎಡ ಭಾಗದಿಂದಬಲ ಭಾಗದ ವರೆಗೆ ಮಧ್ಯ ಸ್ವಲ್ಪ ಜಾಗ ಬಿಟ್ಟು ಬರಳಿನಿಂದ ಎಳೆದು ಹಚ್ಚಿ, ಹೆಬ್ಬೆರಳಿಗೆ ಹಚ್ಚಿರುವ ಭಸ್ಮದಿಂದ ಅವೆರಡರ ಮಧ್ಯದಲ್ಲಿ ಬಲದಿಂದ ಎಡಕ್ಕೆ ಎಳೆದು ಹಚ್ಚಬೇಕು-ತ್ರಿಪುಂಡ್ರ ಭಸ್ಮ ಧಾರಣ.). ವಾಯುರಿತಿಭಸ್ಮ |(ಎರಡೂ ಭುಜಗಳಿಗೆ, ಮುಂಗೈ ಮತ್ತು ಮಧ್ಯ ತೋಳಿಗೆ), ಜಲಮಿತಿಭಸ್ಮ | (ಹೊಟ್ಟೆಗೆ ಎರಡೂ ಕೈಗಳಿಂದ), ವ್ಯೋಮೇತಿ ಭಸ್ಮ|| (ತೊಡೆ ಕಾಲು, ಬೆನ್ನು) ಸರ್ವಗುಂಹವಾ ಯಿದಂ ಭಸ್ಮ|| (ದೇಹದ ಇತರೆ ಭಾಗಗಳಿಗೆ), ಮನ ಏತಾನಿ ಚಕ್ಷು ಗುಂಷಿ ಭಸ್ಮಾನಿ || (ಕಣ್ಣಿನರೆಪ್ಪೆ ಮತ್ತು ಇತರೆ ಭಾಗಗಳಿಗೆ ), ಇತಿ ಧಾರಯೇತ್ || (ಧರಿಸಿಯಾಯಿತು) (ಪ್ರಾಣಾಯಾಮ ಕ್ರಿಯೆ)
ಓಂ ಪ್ರಣವಸ್ಯಪರಬ್ರಹ್ಮ ಋಷಿಃ |(( ಶಿರ-ಬಲಹಸ್ತದಿಂದ ಶಿರವನ್ನು ಮುಟ್ಟುವುದು), ಗಾಯತ್ರೀ ಛಂದಃ | (ಬಾಯಿ - ), ಪರಮಾತ್ಮಾ ದೇವತಾ | (ಹೃದಯ -)ಫ್ರಾಣಾಯಾಮೇವಿನಿಯೋಗಃ | (ಒಂದು ಚಮಚ ನೀರನ್ನು ಹರಿವಾಣಕ್ಕೆ ಬಿಡುವುದು - ಹರಿವಾಣದಬಲ ಪಕ್ಕದಲ್ಲಿ ನೀರಿನ ಥಾಲಿ ಸೌಟು ಇರಬೇಕು. ಎಡ ಕೈಯಲ್ಲಿ ನೀರಿನ ಚಮಚ/ಸೌಟಿನಲ್ಲಿ ನೀರನ್ನುತೆಗೆದುಕೊಂಡುಬಲ ಅಂಗೈ ಮೇಲೆ ಹಾಕಿ ಬೆರಳುಗಳ ತುದಿಯಿಂದ ಹರಿವಾಣಕ್ಕೆ ನೀರು ಬಿಡಬೇಕು).

ಓಂ ಭೂಃ | ಇತಿ ಪಾದಯೋಃ| (ಪಾದಗಳಲ್ಲಿ-ಬಲ ಹಸ್ತದಿಂದ ಎಡ, ಎಡಹಸ್ತದಿಂದ ಬಲ ಪಾದ ಒಟ್ಟಿಗೆ ಸ್ಪರ್ಶಿಸುವುದು) ; ಓಂ ಭುವಃ | ಇತಿ ಜಾನುನೋಃ| (ಬಲದಿಂದ ಬಲ , ಎಡದಿಂದ ಎಡ ಮೊಳಕಾಲುಸ್ಪರ್ಶ). ಓಗ್ಂ ಸುವಃ | ಇತಿ ಊರ್ವೋಃ | (ತೊಡೆಗಳಲ್ಲಿ); ಓಂ ಮಹಃ | ಇತಿ ಜಠರೇ | (ಹೊಟ್ಟೆಯಲ್ಲಿ); ಓಂ ಜನಃ | ಇತಿ ಕಂಠೇ | (ಕುತ್ತಿಗೆಯಲ್ಲಿ); ಓಂ ತಪಃ | ಇತಿ ಮುಖೇ | (ಬಾಯಿಯಲ್ಲಿ); ಓಗ್ಂ ಸತ್ಯಂ | ಇತಿ ಶಿರಸಿ | (ನೆತ್ತಿಯಲ್ಲಿ- ಎಂದರೆ ಸ್ಪರ್ಶಮಾಡಬೇಕು, ಈ ಸ್ಥಾನಗಳಲ್ಲಿ ಮನಸ್ಸನ್ನು ನಿಲ್ಲಿಸು-ಧ್ಯಾನಿಸು)|| ಓಂ ತತ್ಸವಿತುರ್ವರೇಣಿಯಂರ್ಗೋ ದೇಸ್ಯ ಧೀಮಹಿ ಧಿಯೋ ಯೋನಃಪ್ರಚೋಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮಭೂರ್ಭುಸ್ಸುರೋಂ (ಭೂರ್ಭುವಃ ಸುವಃರೋಂ) ||ತ್ರಿವಾರಂ ಉಚ್ಛಾರಯೇತ್| ಇತಿ ಪ್ರಾಣಾನಾಯಮ್ಯ (ಪ್ರಾಣಾಯಾಮ ಆಯಿತು)|| [ಮೂರು ಬಾರಿ ಪಾಣಾಯಾಮ ಮಂತ್ರ ಹೇಳಬೇಕು - ಪ್ರಾಣಾಯಾಮ ಮಾಡುವ ಪದ್ಧತಿ ಇಲ್ಲ, ಮೂಗನ್ನು ಹಿಡಿದುಕೋಂಡು ಮಂತ್ರ ಹೇಳುವುದು -ಪ್ರಾಣಾಯಾಮ ಮಾಡುವುದಾದರೆ , ಓಂ ಭುವಃ ದಿಂದ ಓಗ್ಂ ಸತ್ಯಂ ದ ವರೆಗೆ ಮನಸ್ಸಿನಲ್ಲಿ ಹೇಳುತ್ತಾ ಸ್ಥಾನವನ್ನು ಧ್ಯಾನಿಸುತ್ತಾ, ನಿಧಾನವಾಗಿ ಉಸಿರು ತೆಗೆದು ಕೊಳ್ಳಬೇಕು (ಪೂರಕ), ಗಾಯತ್ರಿ ಮಂತ್ರವನ್ನುಮನಸ್ಸಿನಲ್ಲಿ ಹೇಳುತ್ತಾ ಉಸಿರನ್ನು ಹಿಡಿದಿಟ್ಟು ಕೊಳ್ಳಬೇಕು (ಕುಂಭಕ), ಓಮಾಪೋಜ್ಯೋತಿ - - ಬ್ರಹ್ಮ ಭೂರ್ಭುವಸ್ಸುವರೋಂ ಹೇಳುವಾಗ ಉಸಿರು ನಿಧಾನವಾಗಿ ಬಿಡಬೇಕು (ರೇಚಕ).ಹೆಬ್ಬೆರಳು, ಮಧ್ಯ,ಅನಾಮಿಕ ಬೆರಳುಗಳಿಂದ ಮೂಗನ್ನುಹಿಡಿದುಕೊಂಡು ಮೂರು ಬಾರಿಯೂ ಎಡ ಮೂಗಿನಿಂದ ಉಸಿರು ತೆಗೆದುಕೊಂಡು - ಪೂರಕ, ಉಸಿರು ಹಿಡಿದು -ಕುಂಬಕ, ಬಲ ಮೂಗಿನಿಂದ ಬಿಡಬೇಕು. ಪ್ರತಿಯಂದಕ್ಕೂ ಸುಮಾರು ೧೦ ಸೆಕೆಂಡುಗಳಕಾಲ, ಇದು ಸರಳ ಪ್ರಾಣಾಯಾಮ. ಪ್ರಾಣಾಯಾಮದಲ್ಲಿ ಅನೇಕ ಬಗೆ ಇದೆ. ಮನಶುದ್ಧಿ ಮತ್ತು ಧ್ಯಾನ-ಧಾರಣ ಕ್ರಮಕ್ಕೆ ಪ್ರಾಣಾಯಾಮ ಫೈಲ್ನೋಡಿ ]
ಸಂಕಲ್ಪ ;
ವಿಷ್ಣೋ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ,ದ್ವಿತೀಯ ಪರಾರ್ಧೇ, ಶ್ರೀಹರೇಃ, ಶ್ವೇತ ವರಾಹ ಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ,ಪ್ರಥಮ ಪಾದೇ, ಜಂಬೂ ದ್ವೀಪೇ, ಭರತ ಖಂಡೇ, ಭಾರತ ವರ್ಷೇ, ಶ್ರೀಮದ್ ಗೋದಾವರ್ಯಾಂ, ದಕ್ಷಿಣ ತೀರೇ, ಗೋಕರ್ಣ ಮಂಡಲೇ, ಗೋ ರಾಷ್ಟ್ರ ದೇಶೇ, ಭಾಸ್ಕರ ಕ್ಷೇತ್ರೇ, ಸಹ್ಯ ಪರ್ವತೇ, ಶಾಲಿವಾಹನ ಶಕಾಬ್ಧೇ, ಅಸ್ಮಿನ್ ವರ್ತಮಾನ ಕಾಲೇ, ವ್ಯವಹಾರಿಕೇ, --- ನಾಮ ಸಂವತ್ಸರೇ, ---ಅಯನೇ, ---ಋತೌ,---ಮಾಸೇ, ---ಪಕ್ಷೇ, ---ತಿಥೌ,---ವಾಸರೇ(ವಾರೇ), ಶುಭ ಯೋಗ, ಶುಭ ಕರಣ,ಏವಂ ಗುಣ ವಿಶೇಷಣ ವಿಶಿಷ್ಟಾಯಾಂ, ಪುಣ್ಯಯಾಂ ಪುಣ್ಯ ಕಾಲೇ ,
ಮಮೋಪಾತ್ತ ದುರಿತಕ್ಷಯ ದ್ವಾರಾ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತರ್ / ಮಧ್ಯಾಹ್ನ/ಸಾಯಂ ಸಂಧ್ಯಾಮುಪಾಸ್ಯೆ || (ನೀರು ಬಿಡುವುದು) |ಇತಿಸಂಕಲ್ಪ್ಯ| (ಪ್ರಾತರ್ ಮಧ್ಯಾಹ್ನ ಎರಡೂ ಹೊತ್ತಿನದನ್ನು ಒಟ್ಟಿಗೇ ಮಾಡುವುದುರೂಢಿ)
(ಜಲದೇವತೆಯ ಮಂತ್ರದಿಂದ ಮಂತ್ರ ಸ್ನಾನ );
||ಅಥ ನವ ಮಾರ್ಜನಂ ಕುರ್ಯಾತ್ ||
ಓಂ ಆಪೋಹಿಷ್ಠಾ ಯೋ ಭುವಃ|
ತಾ ರ್ಜೆದಾತನ|| ಓಂ ಹೇರಣಾಯ ಚಕ್ಷಸೇ |
ಯೋವಃ ಶಿವತಮೋರಸಃ|| ಓಂ ತಸ್ಯ ಭಾಜಯತೇ ಹನಃ|
ಶತೀರಿವ ಮಾತರಃ| ಓಂ ತಸ್ಮಾರಂಗ ಮಾಮವಃ|
ಸ್ಯ ಕ್ಷಯಾಜಿನ್ವಥಃ | ಓಂ ಆಪೋ ಜನ ಥಾ ಚ ನಃ||
( ಇದೇ ರೀತಿ ಮುಂದೆ ಮೇಲೆ ಗೀಟು ಉಳ್ಳ ಉದಾತ್ತ ಅಕ್ಷರಗಳನ್ನು ಗೀಟಿಗೆ ಬದಲಾಗಿ ಎದ್ದ (ದಪ್ಪ) ಅಕ್ಷರಗಳಾಗಿಬರೆದಿದೆ ; ಅನುದಾತ್ತಕ್ಕೆ ಕೆಳಗೆ ಗೀಟು ಹಾಕಿದೆ. ಕೆಲವರು ಪ್ರಾರಂಭದಲ್ಲಿಮಾತ್ರ ಓಂ ಕಾರ ಬಳಸುತ್ತಾರೆ )
( ಎಡ ಕೈಯಲ್ಲಿ ಸೌಟು-ನೀರು ಇಟ್ಟು ಕೊಂಡು ಬಲ ಅನಾಮಿಕದಿಂದ ಆ ನೀರನ್ನು ಪಾದದಿಂದನೆತ್ತಿಯವರೆಗೂ ಚಿಮಸಿಕೊಳ್ಳುತ್ತಾ ಮೂರು ಬಾರಿ ಹೇಳಿದರೆ ೯ ಮಾರ್ಜನ -ಸ್ನಾನವಾಗುವುದು. ಅನಿವಾರ್ಯದಲ್ಲಿ ಒಂದು ಬಾರಿ ಹೇಳಿದರೂ ಸಾಕು) (ಇತಿ ಮಾರ್ಜಯಿತ್ವಾ) (ಶುದ್ಧೀಕರಣ ಮಂತ್ರ )
(ಆಪೋಶನ ಮುದ್ರೆ ಯಲ್ಲಿ ಬಲ ಅಂಗೈಯಲ್ಲಿ ಒಂದು ಸೌಟು ನೀರುಇಟ್ಟು ಕೊಂಡು ಎಡದ ಅಂಗೈಯಿಂದ ಮುಚ್ಚಿಕೊಂಡು,ಈ ಕೆಳಗಿನ ಮಂತ್ರ ಹೇಳಿ ನಂತರಕುಡಿಯುವುದು.)
(ಬೆಳಗಿನ ಸಂಧ್ಯಾವಂದನೆಗೆ :) ಅಥ ಪ್ರಾಥಃ ||ಅಥ ಜಲಮಾದಾಯ|| ಓಂ ಸೂರ್ಯಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯುಕೃತೇಭ್ಯಃ| ಪಾಪೇಭ್ಯೋ ರಕ್ಷಂತಾಂ|| ಯದ್ರಾತ್ರಿಯಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ| ರಾತ್ರಿಸ್ತದವಲಂಪತು | ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ ಸೂರ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ|| ಇತಿ ಆಪಃ ಪೀತ್ವಾ ||(ಅಂಗೈಯಲ್ಲಿದ್ದ ನೀರನ್ನು ಆಪೋಶನದಂತೆಕುಡಿಯುದು)
(ಮಧ್ಯಾಹ್ನದ ಸಂಧ್ಯಾವಂದನೆಗೆ ): | ಅಥ ಮಧ್ಯಾಹ್ನೇ|| ಓಂ ಆಪಃ ಪುನಂತು ಪೃಥಿವೀಂ ಪೃಥಿವೀ ಪೂತಾ ಪುನಾತುಮಾಂ| ಪುನಂತು ಬ್ರಹ್ಮಣಸ್ಪ್ರತಿರ್ಬ್ರಹ್ಮ ಪೂತಾ ಪುನಾತುಮಾಂ || ಯದುಚ್ಛಿಷ್ಠ ಮಭೋಜ್ಯಂ ಯದ್ವಾ ದುಶ್ಚರಿತಂ ಮಮ | ಸರ್ವ ಪುನಂತು ಮಾಮಾಪೋ ಸತಾಂ ಚ ಪ್ರತಿಗ್ರಹ ಗುಸ್ವಾಹ || (ಅಂಗೈಯಲ್ಲಿದ್ದ ಮಂತ್ರಿಸಿದ ನೀರನ್ನು ಆಪೋಶನದಂತೆ ಕುಡಿಯುದು )

(ಸಾಯಂ ಸಂಧ್ಯಾವಂದನೆಗೆ) : ಅಥ ಸಾಯಂ ಕಾಲೇ|| ಓಂ ಅ ಗ್ನಿ ಶ್ಚ ಮಾಮನ್ಯುಶ್ಚಮನ್ಯು ಪತಯಶ್ಚ ಮನ್ಯು ಕೃತೇಭ್ಯಃ| ಪಾಪೇಭ್ಯೋ ರಕ್ಷಂತಾಂ|| ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ| ಅಹಸ್ತದವಲಂಪತು | ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ ಸತ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ|| ಇತಿ ಆಪಃ ಪೀತ್ವಾ|| (ಅಂಗೈಯಲ್ಲಿದ್ದ ಮಂತ್ರಿಸಿದ ನೀರನ್ನು ಆಪೋಶನದಂತೆ ಕುಡಿಯುದು)
(೩೨ ಮಂತ್ರ ಸ್ನಾನ)ಪುನಃ ಮಾರ್ಜನ - ದ್ವಾತ್ರಿಂಶತಿ : ಓಂದಧಿಕ್ರಾವ್‌ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ | ಸುರಭಿನೋ ಮುಖಾಕರತ್ಪ್ರಣಆಯೂಗುಂಷಿ ತಾರಿಷತ್ ||||
ಓಂ ಆಪೋಹಿಷ್ಠಾ ಮಯೋ ಭುವಃ|
ತಾನ ಊರ್ಜೆ ದದಾತನ|| ಮಹೇರಣಾಯ ಚಕ್ಷಸೇ |||| ಓಂ
ಯೋವಃ ಶಿವತಮೋ ರಸಃ|| ತಸ್ಯ ಭಾಜಯತೇ ಹನಃ|
ಉಶತೀರಿವ ಮಾತರಃ||||ಓಂ ತಸ್ಮಾ ಅರಂಗ ಮಾಮವಃ|
ಯಸ್ಯ ಕ್ಷಯಾಯಜಿನ್ವಥಃ | ಆಪೋ ಜನಯ ಥಾ ಚ ನಃ|||| ( ಇಲ್ಲಿ ಸ್ನಾನ ಪವನದ, ಶಿರಸ್ಸು ಮತ್ತು ಮುಖಕ್ಕೆ ಅನ್ವಯಿಸುವ ೪ ಮಂತ್ರಗಳನ್ನುಮಾತ್ರಾ ಕೊಟ್ಟಿದೆ. ಮಂದಿನ ೨೮ ಮಂತ್ರಗಳನ್ನು ಕಾಲಾವಕಾಶದ ದೃಷ್ಠಿಯಿಮದ ಕೊಟ್ಟಿಲ್ಲ, ದೈನಂದಿನ ಸಂಧ್ಯಾವಂದನೆಯಲ್ಲಿ ಇಷ್ಟು ಮಂತ್ರಗಳನ್ನುಮಾತ್ರಾ ಹೇಳುವುದು ರೂಢಿ ).
ಅರ್ಘ್ಯ ಪ್ರದಾನ(ಸೂರ್ಯನಿಗೆ ಅರ್ಘ್ಯವನ್ನು ಕೊಡುವುದು -ಬೆಳಗಿನದು ಮಧ್ಯಾಹ್ನದ್ದು ಸಂಧ್ಯಾವಂದನೆ ಮತ್ತು ಅರ್ಘ್ಯ ಪ್ರದಾನ - ಒಟ್ಟಿಗೇ ಮಾಡುವುದುರೂಢಿ ,. ನೀರುತುಂಬಿದ ಥಾಲಿಯನ್ನು ಒಳಮುಖವಾಗಿ ಬೊಗಸೆಯಲ್ಲಿ ಇಟ್ಟು ಕೊಂಡು ಸ್ವಲ್ಪ ಸ್ವಲ್ಪವೇ ಬಗ್ಗಿಸಿಕೊಂಡುಮಧ್ಯದ ಅಂಗೈಗೆ ನೀರು ಬಿಟ್ಟುಕೊಂಡು ಬರಳುಗಳ ತುದಿಯಲ್ಲಿ ಎರಡೂ ಕೈ ಬೊಗಸೆಯಿಂದ ನೀರು ಬಿಡುವುದು, ನಿಂತುಕೊಂಡು ಬೆಳಿಗ್ಗೆ ಮಧ್ಯಾಹ್ನ ಫೂರ್ವಾಭಿಮುಖವಾಗಿ; ಸಂಜೆ ಪಶ್ಚಮ ಅಭಿಮುಖವಾಗಿ ಬಿಡುವುದು ನಿಯಮ ; ಕುಳಿತು ಅರ್ಘ್ಯ ಕೊಡುವುದಾದರೆ ಹಾಗೆಯೇ ಕೊಡುವುದು ರೂಢಿ ;ಹೊಳೆ ಕೆರೆಗಳಲ್ಲಾದರೆ ಬೊಗಸೆಯಲಿ ನೀರನ್ನು ಎತ್ತಿ ಬೆರಳ ತುದಿಯಿಂದ ನೀರು ಬಿಡಬಹುದು):
ಮಮ ಸ್ಮ ತ ಸ್ಮಾರ್ಥನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಪ್ರಾಥಃ /ಮಧ್ಯಾಹ್ನ / ಸಾಯಂ /ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರ್ -ಮಧ್ಯಾಹ್ನ ಅರ್ಘ್ಯ ಪ್ರದಾನಮಹಂ ಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) :
ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ |ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ |ಓಂ ಭುವಃ | ಓ ಗ್ಂ ಸುವಃ | ಓಂ ಮಹಃ|ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂದತ್ವಾ ||
|| ಅಥಾರ್ಘ್ಯಂ ||
ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || ತ್ರಿ ಪ್ರಧಾನಾರ್ಘ್ಯಂ || (ಬೆಳಗಿನ ಕಾಲದ್ದು ಮೂರು ಪ್ರಧಾನ ಅರ್ಘ್ಯ ಕೊಡಬೇಕು - ಕನಿಷ್ಠ ಒಂದನ್ನಾದರೂಕೊಡಬೇಕು )
|| ಅಥ ಮಧ್ಯಾಹ್ನೇ || (ಕಾಲಾತಿಕ್ರಮಣಕ್ಕೆಪ್ರಾಯಶ್ಚಿತ ಅರ್ಘ್ಯ ಬೆಳಗ್ಗಿನಂತೆ) :
ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ |ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ |ಓಂ ಭುವಃ | ಓ ಗ್ಂ ಸುವಃ | ಓಂ ಮಹಃ|ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂದತ್ವಾ ||
(ಮಧ್ಯಾಹ್ನದ ೩ ಪ್ರಾಧಾನ ಅರ್ಘ್ಯ, ಒಂದನ್ನಾದರೂ ಕೊಡುವುದು) :
; ಓಂ ಹಗುಂಸಃ ಶುಚಿಷದ್ವಸು ರಂತರಿಕ್ಷ (ಶುಚಿ ಷದ್ವಸುಃ ಅಂತರಿಕ್ಷ) ಸದ್ದೋತಾ ವೇದಿಷದತಿಥಿರ್ದುರೋಣಸತು| ನೃಷದ್ವರ ಸದ್ಧ್ಯತ ಸದ್ವ್ಯೋಮಾ ಸದಬ್ಜಾ ಗೋಜಾ ಋತಜಾ ಅದ್ರಿಜಾಋತಂ ಬೃಹತೂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ (ಇದಂ ತೇ ಅರ್ಘ್ಯಂ)|| ೨. ಓಂ ಆಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ | ಹಿರಣ್ಯಯೇನ ಸವಿತಾ ರಥೇನಾss ದೇವೋಯಾತಿ ಭುವನಾ ವಿಪಶ್ಯನ್ || ಶಿ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ (ಇದಂ ತೇ ಅರ್ಘ್ಯಂ)||
೩. ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ ||
||ಸಾಯಂಕಾಲೇ|| (ಸಾಯಂಕಾಲ ಬೆಳಗಿನಂತೆ) :
ಮಮ ಸ್ಮ ತ ಸ್ಮಾರ್ಥನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಸಾಯಂ ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಅರ್ಘ್ಯ ಪ್ರದಾನಮಹಂಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) : ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || ತ್ರಿ ಪ್ರಧಾನಾರ್ಘ್ಯಂ || (ಬೆಳಗಿನ ಕಾಲದ್ದು ಮೂರು ಪ್ರಧಾನ ಅರ್ಘ್ಯ ಕೊಡಬೇಕು - ಕನಿಷ್ಠ ಒಂದನ್ನಾದರೂಕೊಡಬೇಕು )
(ಕಾಲಾತಿಕ್ರಮಣಕ್ಕೆ -ಕಾಲ ಮೀರಿದ್ದಕ್ಕೆ ಪ್ರಾಯಶ್ಚಿತ ಅರ್ಘ್ಯ) ಓಂ ಭೂಃ |ಓಂ ಭುವಃ | ಓ ಗ್ಂ ಸುವಃ | ಓಂ ಮಹಃ|ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ |ಓ ಗ್ಂ ಸುವಃ | ಓಂ ಮಹಃ| ಓಂ ಜನಃ |ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ ||
||ಅಥ ತರ್ಪಣ || (ಮೇಲೆ ಹೇಳಿದಂತೆಅಂಗೈಯಿಂದ ನೀರು ಬಿಡಬೇಕು)
ಗಾಯತ್ರೀಂ ತರ್ಪಯಾಮಿ|| ಸಾವಿತ್ರೀಂ ತರ್ಪಯಾಮಿ || ಸರಸ್ವತೀಂ ತರ್ಪಯಾಮಿ ||ಛಂದರ್ಷೀಂ ತರ್ಪಯಾಮಿ || ಸಂಧ್ಯಂ ತರ್ಪಯಾಮಿ |\ಋಗ್ವೇದಂ ತರ್ಪಯಾಮಿ|| ಯಜುರ್ವೇದ ತರ್ಪಯಾಮಿ||ಸಾಮವೇದ ತರ್ಪಯಾಮಿ || ಇತಿ ತರ್ಪಯಿತ್ವಾ ||
(ಆಸಾವಾದಿತ್ಯೋ ಬ್ರಹ್ಮೇತಿ ಬ್ರಹೈವ ಸನ್ ಬ್ರಹ್ಮಾಪ್ಯೇತಿಯ ಏವಂ ವೇದ)
||ಆಸಾವಾದಿತ್ಯೋ ಬ್ರಹ್ಮ || ಜಲ ಹಸ್ತ ಪ್ರದಕ್ಷಿಣಂ ಕೃತ್ವಾ || (ಬಲ ಹಸ್ತದಲ್ಲಿನೀರನ್ನು ತೆಗೆದುಕೊಂಡು ತಲೆಯ ಸುತ್ತ ಪ್ರದಕ್ಷಿಣ ರೀತಿ ಸುತ್ತುವುದು).
ಅನೇನ ಪ್ರಾತರ್-ಮಧ್ಯಾಹ್ನ (ಸಾಯಂ) ಅರ್ಘ್ಯ ಪ್ರದಾನ ವಿಧಿ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ || (ಸಾಯಂಕಾಲಕ್ಕೆ ಸಾಯಂ ಮಾತ್ರಾ ಹೇಳಬೇಕು) ಪೂರ್ವದಾಚಮ್ಯ ||(ಹಿಂದಿನಂತೆ ಆಚಮನ ಮಾಡುವುದು).
(ಅರ್ಘ್ಯ ಅಸ್ತ್ರ ಉಪಸಂಹಾರ)
ಉತ್ತಿಷ್ಠ ದೇವಿಗಂತವ್ಯಂ ಪುನರಾಗಮನಾಯಚ || ಉತ್ತಿಷ್ಠ ದೇವಿ ಸ್ಥಾತವ್ಯಂ (ಗಾಯತ್ರೀ) ಪ್ರವಿಶ್ಯ ಹೃದಯಂಮಮ||
(ಗಾಯತ್ರೀ ಜಪ : - ಯಾವದೇ ಜಪ ಮಾಡುವಾಗ ಎಡದ ಕೈಯನ್ನು ಜನಿವಾರದಗಂಟಿನೊಂದಿಗೆ ಹೃದಯದ ಮೇಲೆ ಇಟ್ಟುಕೊಂಡು ಬಲಕೈ ಬೆರಳುಗಳಿಂದ ಜಪದ ಎಣಿಕೆ ಮಾಡುವುದು - ಅಥವಾ ಹೋಕ್ಕಳಕೆಳಗೆ ಕಾಲುಗಳ ಮೇಲೆ ಎಡ ಅಂಗೈ -ಅದರ ಮೇಲೆ ಬಲ ಅಂಗೈಇಟ್ಟು ಕೊಂಡು ಬಲ ಕೈ ಬೆರಳ ಗಿಣ್ಣು ಎಣಿಸುತ್ತಾ ಜಪ ಮಾಡಬಹುದು -ಜಪ ಮಾಡುವಾಗ ತುಟಿ, ನಾಲಗೆ, ಅಥವಾ ಗಂಟಲ ಸ್ನಾಯುಗಳು ಅಲುಗಾಡದಂತೆ ಮನಸ್ಸಿನಲ್ಲಿ ಪ್ರತಿಅಕ್ಷರವೂ ಬರುವಂತೆ (ಬಿಡದಂತೆ) ಜಪಮಾಡುವುದು ಶ್ರೇಷ್ಠವಾದುದು; ಕಣ್ಣನ್ನು ಅರ್ಧ ಮಚ್ಚಿರಬೇಕು, ಮೂಗಿನ ತುದಿ ನೋಡುತ್ತಾ ಕಣ್ಣಿಗೆ ತೊಂದರೆಕೊಡುವ ಅಗತ್ಯವಿಲ್ಲ.ಮಂದ ಬೆಳಕಿರಬೇಕು. ನಿಶ್ಶಬ್ದವಿರಬೇಕು, ಹೊಟ್ಟೆ ತುಂಬಿರಬಾರದು, ತೀರಾ ಖಾಲಿಯಾಗಿರಬಾರದು, ಮನಸ್ಸು ಶಾಂತವಾಗಿ, ಆನಂದ ವಾಗಿರಬೇಕು): ಗುರು ವಂದನೆ :
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ||
ಚಕ್ಷುರುನ್ಮೀಲಿತಂಯೇನ ತಸ್ಮೈ ಶ್ರೀಗುರವೇ ನಮಃ|| ೧). ಓಂ ಗುಂ ಗುರಭ್ಯೋನಮಃ || ಓಂ ಗಂ ಗಣಪತಯೇ ನಮಃ|| ಓಂ ದುಂ ದುರ್ಗಾಯೈ ನಮಃ ||ಓಂ ಕ್ಷಂ ಕೇತ್ರ ಪಾಲಾಯ ನಮಃ|| ಓಂ ಸಂ ಸರಸ್ವತ್ಯೈ ನಮಃ||ಓಂ ಪಂ ಪರಮಾತ್ಮನೇ ನಮಃ || (ನಮಃ ಹೇಳುವಾಗ ,ಶಿರಸ್ಸು, ಬಲ ಭುಜ, ಎಡ ಭಜ,ಮೊಣ ಕಾಲು, ನಾಭಿ, ಹೃದಯಗಳನ್ನು ಮಟ್ಟಿಕೋಳ್ಳಬೇಕು -ಅಲ್ಲಿ ಆ ದೇವತೆಗಳನ್ನುಸ್ಥಾಪಿಸಿದಂತೆ) ೨). ಓಂ ಭೂಃ | ಇತಿ ಪಾದಯೋಃ| (ಪಾದಗಳಲ್ಲಿ-ಬಲ ಹಸ್ತದಿಂದ ಎಡ, ಎಡಹಸ್ತದಿಂದ ಬಲ ಪಾದ ಒಟ್ಟಿಗೆ ಸ್ಪರ್ಶಿಸುವುದು) ; ಓಂ ಭುವಃ | ಇತಿ ಜಾನುನೋಃ| (ಬಲದಿಂದ ಬಲ , ಎಡದಿಂದ ಎಡ ಮೊಳಕಾಲುಸ್ಪರ್ಶ). ಓಗ್ಂ ಸುವಃ | ಇತಿ ಊರ್ವೋಃ | (ತೊಡೆಗಳಲ್ಲಿ); ಓಂ ಮಹಃ | ಇತಿ ಜಠರೇ | (ಹೊಟ್ಟೆಯಲ್ಲಿ); ಓಂ ಜನಃ | ಇತಿ ಕಂಠೇ | (ಕುತ್ತಿಗೆಯಲ್ಲಿ); ಓಂ ತಪಃ | ಇತಿ ಮುಖೇ | (ಬಾಯಿಯಲ್ಲಿ); ಓಗ್ಂ ಸತ್ಯಂ | ಇತಿ ಶಿರಸಿ |(ನೆತ್ತಿಯಲ್ಲಿ- ಎಂದರೆ ಸ್ಪರ್ಶಮಾಡಬೇಕು, ಅಥವಾ ಮನಸ್ಸನ್ನು ನಿಲ್ಲಿಸು-ಧ್ಯಾನಿಸು)|| ಯಿತಿ ವಿನ್ಯಸ್ಯ|| (ಈ ರೀತಿ ವಿನ್ಯಾಸಕ್ರಿಯೆ). ೩). ಓಂ ವಿಶ್ವಾಮಿತ್ರ ಋಷಿಃ || ಶಿರಸಿ||(ನೆತ್ತಿ ಸ್ಪರ್ಶಿಸು)
ದೇವೀ ಗಾಯತ್ರೀ ಛಂದಃ || ಮುಖೇ|| (ಬಾಯಿ)
ಸವಿತಾ ದೇವತಾ || ಹೃದಯೇ|| (ಮುಟ್ಟಿ ಕೊಳ್ಳಬೇಕು).
ಗಾಯತ್ರೀ ಜಪೇ ವಿನಿಯೋಗಃ|| (ಚಮಚದ ನೀರನ್ನು ಬಲ ಕೈಯಿಂದ ನೀರು ಬಿಡಬೇಕು). ೪) ಅಥ ಜಪಂ || (ಜಪ ಮಾಡುವುದು) (೧೦೮ - ೨೮- ೧೦ಜಪ)
ಓಂ ಭೂರ್ಭುವಸ್ಸುವಃ|| (ಓಂ) ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃಪ್ರಚೋದಯಾತ್ ||
(ಭೂಃ ಭುವಃ ಸುವಃ ಸೇರಿದರೆ - ಭೂರ್ಭುವಸ್ಸುವಃ; ಕೆಲವರಲ್ಲಿ ಎರಡನೇ ಬಾರಿ ಓಂ ಸೆರಿಸುವ ಪದ್ದತಿ ಇಲ್ಲ.) || ಜಪಿತ್ವಾ || ಶ್ರೀ ಗಾಯತ್ರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || (ಬಲ ಕೈ ಯಿಂದ ನೀರು ಬಿಡುವುದು)
(ಸರ್ವದೇವ ನಮಸ್ಕಾರ ) : ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ| ನಮಃ ಪ್ರಥಿವೈ | ನಮಃ ಓಷದೀಭ್ಯಃ|| ನಮೋ ವಾಚೇ ನಮೋ ವಾಚಸ್ಪತಯೇ| ನಮೋ ವಿಷ್ಣವೇ | ಬೃಹತೇ ಕರೋಮಿ|| ಓಂ ಶಾಂತಿಃ ಶಾಂತಿಃ ಶಾಂತಿಃ || ಓಂ ಸಂಧ್ಯಾಯೈ ನಮಃ | ಓಂ ಗಾಯತ್ರೈ ನಮಃ | ಓಂ ಸಾವಿತ್ರೈನಮಃ | ಓಂ ಸರಸ್ವತ್ತೈ ನಮಃ | ಓಂ ಸರ್ವಾಭ್ಯೋ ದೇವತಾಭ್ಯೋ ನಮಃ | ಓಂ ಸರ್ವೇಭ್ಯೋ ದೇವೇಭ್ಯೋ ನಮಃ | ಓಂ ಋಷಿಭ್ಯೋ ನಮಃ | ಓಂ ಮುನಿಭ್ಯೋ ನಮಃ| ಓಂ ಗುರುಭ್ಯೋ ನಮಃ| ಓಂ ಆಚಾರ‍್ಯೇಭ್ಯೋ ನಮಃ| ಓಂ ಇಷ್ಟದೇವತಾಭ್ಯೋ ನಮಃ | ಓಂ ಈಶಾನ ಗೋ ಪಿತೃ ಮಾತೃ ಗುರು ದೇವತಾಭ್ಯೋ ನಮಃ || ಸಂಧ್ಯಾ ಸರಸ್ವತೀಬ್ಯೋನಮೋ ಅಸ್ತು ||
ಶ್ರೀಮದ್ ಯಜುಃಶಾಖಾ ಬೋಧಾಯನ ಸೂತ್ರಾನ್ವಿತ - ೧ . ಕಾಶ್ಯಪ ವತ್ಸರ ನೈದೃವ ತ್ರಯಾ ಋಷಯಃ ಪ್ರವರಾನ್ವಿತಕಾಶ್ಯಪ ಗೋತ್ರೋತ್ಪನ್ನ --ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || ೨. ವಿಶ್ವಾಮಿತ್ರ ದೇವರಾತಔದಲೇತಿ ತ್ರಯಾ ಋಷಯ ಪ್ರವರಾನ್ವಿತ ವಿಶ್ವಾಮಿತ್ರ ಗೋತ್ರೋತ್ಪನ್ನ -- ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || (ಇದರಂತೆ ಅವರವರ ಗೋತ್ರ ಪ್ರವರ ಹೇಳಿ ಅಭಿವಾದನೆ -ನಮಸ್ಕಾರ ಮಾಡಬೇಕು; ಎಡದ ಕೈಯಿಂದ ನೆಲ ಮುಟ್ಟಿಕೊಂಡು ಬಲ ಕೈಯಿಂದ ನೆಲವನ್ನೂ ಬಲ ಕಿವಿಯನ್ನೂ ಮೂರು ಬಾರಿ ಮುಟ್ಟಿಕೊಳ್ಳುವುದು- ಹಿರಿಯರಿಗೆ ನಮಸ್ಕಾರ ಮಾಡುವಾಗ ಎಡ ಕೈಯಿಂದ ಅವರಬಲ ಪಾದ ಮುಟ್ಟಿಕೊಂಡು ಮೂರು ಬಾರಿ ಅಭಿವಾದನೆ ಮಾಡಬೇಕು)
(ನಿಂತು ದಕ್ಷಿಣಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಯಮ ಸ್ತುತಿ)
ಓಂ ಯಮಾಯ ಧರ್ಮರಾಜಾಯ | ಮೃತ್ಯವೇ ಚಾಂತ್ತಕಾಯ ಚ || ವೈವಸ್ವತಾಯ ಕಾಲಾಯ | ಸರ್ವ ಭೂತ ಕ್ಷಯಾಯಚ | ಔದಂಬರಾಯ ದದ್ನಾಯ |ನೀಲಾಯ ಪರಮೇಷ್ಠಿನೇ ||ವೃಕೋದರಾಯ ಚಿತ್ರಾಯ | ಚಿತ್ರ ಭುಕ್ತಾಯ ವೈ ನಮೋ ನಮಃ|| (ಉತ್ತರಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಶಿವ ಸ್ತುತಿ) ಋತಗ್ಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ | ಊರ್ಧ್ವ ರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈನಮೋ ನಮಃ|| (ಶಿಷ್ಟ ರಕ್ಷಕ ಶ್ರೀ ಕೃಷ್ಣನಿಗೆ ನಮಸ್ಕಾರ )
ನಮೋ ಬ್ರಹ್ಮಣ್ಯದೇವಾಯ | ಗೋ ಬ್ರಾಹ್ಮಣ್ಯ ಹಿತಾಯಚ || ಜಗದ್ದಿತಾಯ ಕೃಷ್ಣಾಯ |ಗೋವಿಂದಾಯ ವೈ ನಮೋ ನಮಃ ||
ಆಕಾಶಾತ್ ಪತಿತಂತೋಯಂ | ಯಥಾ ಗಚ್ಛತಿ ಸಾಗರಂ | ಸರ್ವ ದೇವ ನಮಸ್ಕಾರಂ | ಕೇಶವಂ ಪ್ರತಿ ಗಚ್ಛತಿ || ಇತಿ ಪ್ರದಕ್ಷಿಣ ತ್ರಯಂ ಕೃತ್ವಾ || (ಮೂರು ಪ್ರದಕ್ಷಿಣ ನಮಸ್ಕಾರ ಮಾಡಿ ಕುಳಿತುಕೊಳ್ಳುವುದು.).
( ಅಷ್ಟಾಕ್ಷರೀ ಜಪಂ : )
ಶ್ರೀಪರಮೇಶ್ವರಪ್ರೀತ್ಯರ್ಥಂ ಅಷ್ಟಾಕ್ಷರೀ ಜಪಂ ಕರಿಷ್ಯೇ (ಬಲ ಹಸ್ತದಿಂದ ನೀರು ಬಿಡುವುದು)
ಓಂ ಸಾಧ್ಯಾ ನಾರಾಯಣಋಷಿಃ | (ಶಿರಸಿ -ಮುಟ್ಟಿಕೊಳ್ಳುವುದು.) | ಗಾಯತ್ರೀ ಛಂದಃ (ಮುಖೇ- ಬಾಯಿ)| ಪರಬ್ರಹ್ಮ ಪರಮಾತ್ಮಾ ದೇವತಾ| ಹೃದಯೇ|ಅಷ್ಟಾಕ್ಷರೀ ಜಪೇ ವಿನಿಯೋಗಃ||
|| ಓಂ ನಮೋ ನಾರಾಯಣಾಯ ||
(ಗಾಯತ್ರೀ ಜಪದ ಎರಡರಷ್ಟು ಜಪ)
ಅಷ್ಟಾಕ್ಷರೀ ಜಪಂಶ್ರೀ ಪರಮೇಶ್ವರ ಪ್ರೀಯತಾಂ ||
(ಬಲ ಹಸ್ತದಿಂದ ನೀರು ಬಿಡುವುದು)
( ಪಂಚಾಕ್ಷರೀ ಜಪ : )
ಶ್ರೀ ಪರಮೇಶ್ವರಪ್ರೀತ್ಯರ್ಥಂ ಪಂಚಾಕ್ಷರೀ ಜಪಂ ಕರಿಷ್ಯೇ (ಬಲ ಹಸ್ತದಿಂದನೀರು ಬಿಡುವುದು).
|| ಆಚಮ್ಯ ||
ಓಂ ವಾಮದೇವ ಋಷಿಃ||ಶಿರ|| ಪಂಕ್ತೀ ಛಂದಃ || ಮುಖ ||ಶ್ರೀ ಸದಾಶಿವ ರುದ್ರೋ ದೇವತಾ|| ಹೃದಯ || ಪಂಚಾಕ್ಷರೀ ಜಪೇ ವಿನಿಯೋಗಃ || ಓಂ ನಮಃ ಶಿವಾಯ || (ಅಷ್ಟಾಕ್ಷರೀ ಜಪದ ಎರಡರಷ್ಟುಜಪ).
ಪಂಚಾಕ್ಷರೀ ಜಪಂಶ್ರೀ ಪರಮೇಶ್ವರ ಪ್ರೀಯತಾಂ || (ಸಂಧ್ಯಾವಂದನ ಮುಕ್ತಾಯ)
ಯಸ್ಯ ಸ್ಮ ತ್ಯಾಚ ನಾಮೋಕ್ತಾ |
ತಪೋ ಸಂಧ್ಯಾ ಕ್ರಿಯಾದಿಷು ||
ನ್ಯೂನಂ ಸಂಪೂರ್ಣತಾಂ ಯಾತಿ |
ಸದ್ಯೋ ವಂದೇ ತಂಅಚ್ಯುತಂ || ಅನೇನ ಪ್ರಾತಃ / ಮಧ್ಯಾಹ್ನ / ಸಾಯಂ / ಸಂಧ್ಯಾವಧಿ ಕರ್ಮಣಃ ಶ್ರೀ ಪರಮೇಶ್ವರ ಪ್ರೀಯತಾಂ || ಪ್ರೀಯತೋ ವರದೋ ಭವತು ||
ಸಂಧ್ಯಾ ಕಾಲೇಮಂತ್ರ ತಂತ್ರ , ಸ್ವರ ವರ್ಣ, ನ್ಯೂನಾತಿರಿಕ್ತ, ಲೋಪ ದೋಷ ,ಪ್ರಾಯಶ್ಚಿತ್ತಾರ್ಥಂ ನಾಮ ತ್ರಯಜಪಂ ಅಹಂ ಕರಿಷ್ಯೆ || ಓಂ ಅಚ್ಯುತಾಯ ನಮಃ || ಓಂ ಅಚ್ಯುತಾಯ ನಮಃ || ಓಂ ಅನಂತಾಯ ನಮಃ || ಓಂ ಅನಂತಾಯ ನಮಃ ಓಂ ಗೋವಿಂದಾಯ ನಮಃ ||ಓಂ ಗೋವಿಂದಾಯ ನಮಃ || ವಿಷ್ಣೋ -ವಿಷ್ಣೋ ಸ್ಮರನ್ ||ವಿಷ್ಣವೇ ನಮಃ|| ವಿಷ್ಣವೇ ನಮಃ || ವಿಷ್ಣವೇ ನಮಃ||
|| ದ್ವಿರಾಚಮ್ಯ || ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ|| ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ ||
ಓಂ ತತ್ಸತ್

(ಅಭ್ಯಾಸವಾದರೆ ಈಕ್ರಮದ ಸಂಧ್ಯಾವಂದನೆಯನ್ನು ೧೦-೧೨ ನಿಮಿಷಗಳಲ್ಲಿಮಾಡಿ ಮುಗಿಸಬಹುದು. ಶಾಲೆಗೆ ಹೋಗುವ ಮಕ್ಕಳಿಗಾಗಿ ಮುಖ್ಯಾಂಶಗಳನ್ನು ಮಾತ್ರಾ ಸಂಗ್ರಹಿಸಿದೆ ಮತ್ತುವಿವರಣೆಕೊಟ್ಟಿದೆ. ಚಂ.)




ಅಥ ಬೋಜನ ವಿಧಿ

(ಕಂಪ್ಯುಟರಿಗೆ ಸಂಗ್ರಹಿಸಿಹಾಕಿ ಟಿಪ್ಪಣಿ ಬರೆದವರು :ಬಿ.ಎಸ್. ಚಂದ್ರಶೇಖರಸಾಗರ. )

(ಅನ್ನಕ್ಕೆ ನಮಸ್ಕಾರ)
ಅನ್ನ ಪೂರ್ಣೇಸದಾ ಪೂರ್ಣೇ ಶಂಕರಪ್ರಾಣ ವಲ್ಲಭೇ |??
ಜ್ಞಾನ ಸೌಭಾಗ್ಯಸಿಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತೀ || ಇತಿ ನಮಸ್ಕ ತ್ಯ||

ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||ಇತಿ ಪ್ರೋಕ್ಷ್ಯ|| (ಅನ್ನಕ್ಕೆ ನೀರನ್ನು ಚಿಮುಕಿಸುವುದು)
ಸತ್ಯಂ ತ್ವರ್ತೇನಪರಿಷಿಂಚಾಮಿ || ( ಸತ್ಯಂ ತ ವರ್ತೇನ) ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ|| (ನೀರಿನಿಂದ ಅನ್ನದ ಥಾಲಿ/ ಬಾಳೆ ಎಲೆಯನ್ನು ಪ್ರದಕ್ಷಿಣವಾಗಿಸುತ್ತುಕಟ್ಟುವುದು); || [ ರಾತ್ರಿ ಭೋಜನೇ ಋತಂ ತ್ವಾ ಸತ್ಯೇನ ಪರಿಷಿಂಚಾಮಿ ಇತಿ ಪರಿಷಿಂಚೇತ್ ] || ತದ್ದಕ್ಷಿಣತಃ ದಂಡಾಕಾರೇಣಭೂಮೌ ಜಲಂ ನಿನೀಯ (ಊಟದೆಲೆಯ ಬಲದಲ್ಲಿ ನೀರಿನಿಂದ ಗೆರೆ ಎಳೆದು ಅದರ ಮೇಲೆ ಬಲಿಯನ್ನು ಇಡುವುದು )|| ತದುಪರಿ : (ಬಲ ಭಾಗದಲ್ಲಿ ನೀರಿನಿಂದ ಗೆರೆ ಎಳೆದು-ನಂತರ): ಓಂ ಚಿತ್ರಾಯ ಸ್ವಾಹಾ | ಓಂ ಚಿತ್ರ ಗುಪ್ತಾಯ ಸ್ವಾಹಾ | ಓಂ ಯಮಾಯ ಸ್ವಾಹಾ | ಓಂ ಯಮಧರ್ಮ ರಾಜಾಯಸ್ವಾಹಾ | ಓಂ ಸರ್ವಭೂತೇಭ್ಯಃ ಸ್ವಾಹಾ | ಇತಿ ಅಪವರ್ಗಾನ್ ಬಲೀನ್ ದತ್ವಾ (ಅನ್ನದ ಅಗುಳಿನ ಐದು ಬಲಿಯನ್ನುಇಡುವುದು) ಚಿತ್ರಾಯ ನಮಃ ತೃಪ್ತಿರಸ್ತು | ಚಿತ್ರಗುಪ್ತಾಯ ನಮಃ ತೃಪ್ತಿರಸ್ತು | ಯಮಾಯ ನಮಃ ತೃಪ್ತಿರಸ್ತು | ಯಮಧರ್ಮರಾಜಾಯ ನಮಃ ತೃಪ್ತಿರಸ್ತು | ಸರ್ವಭೂತೇಭ್ಯೋ ನಮಃ ತೃಪ್ತಿರಸ್ತು | ಇತಿ ತದುಪರಿ ಜಲಮಾಸಿಚ್ಯ ಏಕೀಕೃತ್ಯ ಹಸ್ತಂ ಪ್ರಾಕ್ಷಾಲ್ಯ| (ಒಂದೇ ಸಾರಿ ಅವುಗಳ ಮೇಲೆ ನೀರು ಬಿಟ್ಟು ಒಟ್ಟು ಸೇರಿಸುವುದು; ಕೈ ತೊಳೆದುಕೊಳ್ಳುವುದು; ಕೈತೊಳೆದುಕೊಳ್ಳಲು ಅವಕಾಶ ಅನುಕೂಲ ಇರದಿದ್ದರೆ , ಒಟ್ಟು ಸೇರಿಸುವಕ್ರಿಯೆ ಬಿಡುವುದು) [ಓಂ ಯಮಾಯ ಸ್ವಾಹಾ ಯಮಾಯ ನಮಃ ತೃಪ್ತಿರಸ್ತು ಎಂದು ಒಟ್ಟಿಗೆ ಹೇಳುವ ಪದ್ದತಿಯೂಇದೆ. ಪ್ರತಿ ಬಲಿಗೂ ತೃಪ್ತಿರಸ್ತು ಹೇಳುವ ಬದಲು ಐದೂ ಬಲಿಗಳನ್ನು ಇಟ್ಟು,ಒಟ್ಟುಸೇರಿಸಿದಮೇಲೆ, ಪ್ರತಿ ದೇವತೆಗೂ ನಮಃ ತೃಪ್ತಿರಸ್ತು ಹೇಳುವ ಬದಲು ಸರ್ವೇಭ್ಯೋನಮಃ ತೃಪ್ತಿರಸ್ತು ಎಂದು ಒಂದೇ ಬಾರಿ ಹೇಳುವ ರೂಢಿಯೂ ಇದೆ. ಇದು ಸರಳ ಸುಲಭ]
||ದಕ್ಷಿಣ ಹಸ್ತೇ ಜಲಮಾದಾಯ, ವಾಮ ಹಸ್ತಸ್ಯ ಅನಾಮಿಕಾಯಾ ಭೋಜನ ಪಾತ್ರಂ ಸ್ಪ ಟ್ವಾ ||(ಬಲ ಅಂಗೈಲ್ಲಿನೀರನ್ನು ಇಟ್ಟುಕೊಂಡು ; ಹೆಬ್ಬರಳು ಅನಾಮಿಕ ಬೆರಳ ಬುಡಕ್ಕೆ ತಾಗುವಂತಿರಬೇಕು; ಎಡ ಕೈ ಅನಾಮಿಕದಿಂದ ಊಟದ ಎಲೆಯನ್ನು ಮುಟ್ಟಿಕೊಂಡಿರಬೇಕು; ನಂತರ ಮುಂದಿನ ಮಂತ್ರವನ್ನು ಹೇಳಿ ಸ್ವಾಹಾ ಎಂದಾಗ ಆಪೋಶನ ತೆಗೆದುಕೊಳ್ಳಬೇಕು. ಎರಡು ಮಂತ್ರಗಲ್ಲಿಒಂದು ಮಂತ್ರ ಹೇಳಿದರೂ ಸಾಕು. ವಿಶೇಷ ಸಂಧರ್ಭದಲ್ಲಿ ಎರಡೂಮಂತ್ರ ಹೇಳುತ್ತಾರೆ.) ಓಂ ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು| ತ್ವಂ ಯಜ್ಷ ಸ್ತ್ವಂ ? ವಷಟ್ಕಾರ ಸ್ತ್ವಂ ಮಿಂದ್ರ ಸ್ತ್ವಂ ರುದ್ರ ಸ್ತ್ವಂ ವಿಷ್ಣುಸ್ತ್ವಂ ಬ್ರಹ್ಮ ತ್ವಂ ಪ್ರಜಾಪತಿಃ ||ತ್ವಂ ತದಾಪ ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) | ಓಂ ಪ್ರಜಾಪತೇ ನ ತ್ವ ದೇತಾನನ್ಯೋ ವಿಶ್ವಾ ಜಾತಾನಿ ಪರಿತಾಬಭೂವ | ಯತ್ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಸ್ಯಾಮ ಪತಯೋ ರಯೀಣಾಂ || ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಜಲಂ ಪೀತ್ವಾ (ಆಪೋಷನ ತೆಗೆದು ಕೊಳ್ಳುವುದು)|| ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ (ಈ ಆರು ಮಂತ್ರಗಳನ್ನು ಹೇಳುತ್ತಾ ಪ್ರತಿ ಮಂತ್ರಕ್ಕೂ ಬಲಭಾಗದಿಂದ ಎರಡುಮೂರು ಅನ್ನದ ಅಗುಳನ್ನು ಬಾಯಿಯಲ್ಲಿಟ್ಟುಕೊಂಡು ನುಂಗುವುದು , ಹಲ್ಲಿನಿಂದ ಅಗಿಯಬಾರದೆಂಬ ವಚನವಿದೆ)||ಇತಿ ಷಡ್ವಾರಂ ಪ್ರಾಣಾಹುತಿಂಮಖೇ ಜುಹುಯಾತ್ || ಭೋಜನಾಂತೇ ದಕ್ಷಿಣ ಹಸ್ತೇ ಜಲಂ ಗ್ರಹೀತ್ವಾ ||ಭೋಜನ ನಂತರ ಪನಃ (ಉತ್ತರ) ಆಪೋಶನ ; ಆಪೋಶನದ ಅರ್ಧನೀರನ್ನುಕುಡಿದು , ಅರ್ಧ ನೀರನ್ನುನೆಲಕ್ಕೆ ಬಿಡುವುದು, ಮಂತ್ರ : ) ಅಮೃತಾ ಪಿ ಧಾನಮಸಿ ಸ್ವಾಹಾ || ಇತ್ಯರ್ಧಂ ಪೀತ್ವಾ ಅವಶಿಷ್ಟಾರ್ಧಜಲಂ ಭೂಮೌ ನೀನಯ ರೌರವೇ ಪುಣ್ಯ ನಿಲಯೇ ಪದ್ಮಾರ್ಬುದ ನಿವಾಸಿನಾಂ | ಅರ್ಥಿ ನಾಮುದಕಂ ದತ್ತಮಕ್ಷಯ್ಯ ಮುಪತಿಷ್ಠತು [ಈ ಮಂತ್ರವನ್ನುಅರ್ಧ ನೀರನ್ನು ಭೂಮಿಗೆ ಬಿಡುವಾಗ ಹೇಳುವುದು ;ಈ ಮಂತ್ರವನ್ನು ನಿತ್ಯ ಭೋಜನದಲ್ಲಿಎಲ್ಲರೂ ಕೈ ಬಿಟ್ಟಿದ್ದಾರೆ] || ಹಸ್ತ ಪಾದೌ ಪ್ರಾಕ್ಷಾಲ್ಯ |ದ್ವಿರಾಚಮ್ಯ | (ಭೋಜನಾನಂತರ) ಅಗಸ್ತ್ಯಂ ಕುಂಭಕರ್ಣಂಚ ಶನಿಂ ಚ ವಡವಾನಲಂ | ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ || ಇತಿ ಜಪೇತ್|| [ಊಟದ ನಂತರ ಮಾಡುವ ಜಪ ;ಆ ಮಹಾನುಭಾವರಂತೆ ಊಟಮಾಡಿದ್ದೆಲ್ಲಾಜೀರ್ಣವಾಗಲಿ ಎಂಬ ಪ್ರಾರ್ಥನೆಯ ಜಪ. ಈಗ ಯಾರೂ ಮಾಡುವುದಿಲ್ಲ. ಪಿತೃ ಶ್ರಾದ್ಧದ ದಿನ ವೈದೀಕರು ಕೆಲವರುಊಟದ ನಂತರ ಈ ಮಂತ್ರ ಹೇಳುತ್ತಾರೆ]
ಓಂ ತತ್ ಸತ್.

1 comment: